
ಗಜಲ್ ಗಳು ಕನ್ನಡದಲ್ಲಿಯೂ ಇಷ್ಟೊಂದು ಭಾವಪೂರಿತವಾಗಿ ಇರುತ್ತವೆ ಅನ್ನುವದು ನನಗೆ ಗೊತ್ತೇ ಇರಲಿಲ್ಲ. ಡಾ|| ರಾಜೇಂದ್ರ ಎಸ್. ಗಡಾದ ಅವರೇ ಬರೆದ ಈ ಗಜಲ್ ನಿಮಗಾಗಿ.... ಅವರನ್ನು ಪ್ರೋತ್ಸಾಹಿಸೋಣ,
ಪ್ರೀತಿಗೆ ಬೆಂಕಿ ಬಿದ್ದ ಮೇಲೆ ದಿಢೀರ್ ಬಿರುಗಾಳಿ ಬೀಸಿತು.
ಅರಳುತ್ತಿದ್ದ ಆಸೆ ಕಮರಿತು ಮನಸು ಮುದುಡಿತು.
ಹೂವುಗಳನು ಮಟ್ಟಲೋದೆ ಮುಖವ ಮುಚ್ಚಿಕೊಂಡವು
ದುಂಬಿಗಳನು ಮಾತನಾಡಿಸಿದೆ ಮೌನದಿ ಎದ್ದು ಹೋದವು.
ಅತ್ತ ನೋಡಿದೆ ಹಸಿರು ಹುಲ್ಲಿನ ಮೇಲಿನ ರಂಗು ಮಾಯವಾಯಿತು
ಇತ್ತ ಹೊರಳಿದೆ ಪುಟಿದೆದ್ದ ಕುಣಿವ ಕಾರಂಜಿ ನಿಂತು ಬಿಟ್ಟಿತು.
ಮಾಮರದ ಕೆಳಗೆ ಹೋದೆ ಕೋಗಿಲೆಯ ದನಿ ಸುಳಿಯಲಿಲ್ಲ
ಗೋಲಗುಮ್ಮಟದಿ ಕೂಗಿದೆ ಅವಳ ಹೆಸರು ಪ್ರತಿಧ್ವನಿಸಲಿಲ್ಲ.
ಮುತ್ತುಗಳನು ಪೋಣಿಸಲು ಕುಳಿತೆ ಕೈಜಾರಿ ಹೋದವಲ್ಲ
ಕನ್ನಡಿ ಮುಂದೆ ನಿಂತೆ ಸಿಡಿದು ಚೂರು ಚೂರಾಯಿತಲ್ಲ.
ಬಾನಲ್ಲಿ ಚಂದಿರನ ನೋಡಲೋದೆ ಮೋಡದಿ ಮರೆಯಾಯಿತು
ಕಲ್ಲು ಸಕ್ಕರೆಯ ಮೆಲ್ಲಲೋದೆ ಬಾಯೆಲ್ಲಾ ಕಹಿಯಾಯಿತು.
ಗುಪ್ತಗಾಮನಿಯಾದ ನನ್ನ ಪ್ರೀತಿ ಅವಳಿಗೆ ಹೋಳೆದೀತು ಹೇಗೆ?
ಬತ್ತಿಹೋಗುತ್ತಿರುವ ನನ್ನೊಲುಮೆ ಅರ್ಥವಾದೀತು ಹೇಗೆ?
ನಿಜವಾಗಲೂ ಎಷ್ಟೋಂದು ಭಾವಪೂರ್ಣದಿಂದ ಕೂಡಿದೆ.............
ಹಾಗೇ ನೋಡಿದರೆ ನನಗೆ ಈ ಸಾಲುಗಳು ಪ್ರಸಿದ್ಧ ಹಿಂದಿ ಚಿತ್ರ "ಮೇರಾ ನಾಮ ಜೋಕರ್" ನ ರಾಜ್ ಕಪೂರನನ್ನು ನೆನಪಿಸುತ್ತದೆ............... ನಿಮಗೆ..........?
1 ಕಾಮೆಂಟ್:
ತು೦ಬಾ ಭಾವಪೂರ್ಣ ಸಾಲುಗಳು..
ಚೆನ್ನಾಗಿ ಬರೆದಿದ್ದಾರೆ.
ಕಾಮೆಂಟ್ ಪೋಸ್ಟ್ ಮಾಡಿ