ಮಂಗಳವಾರ, ಜನವರಿ 11, 2011
ಪುನರ್ಜನ್ಮ
ನನ್ನ ಚಿತ್ತದೊಳು
ಸದಾ ನಿನ್ನದೇ ಚಿತ್ರ
ನಾ ಸತ್ತಾಗ ನನ್ನ ಚಿತೆಗೂ
ನಿನ್ನದೇ ಚಿಂತೆ
ಏಕೆ?
ನನ್ನ ಹೃದಯದ ಬಡಿತದ ನಾದ
ನಿನ್ನ ಮೌನ ಭಾವಕ್ಕೆ ತಿಳಿಯಲಿಲ್ಲವೇ?
ನಿನ್ನನ್ನು ಚಿತ್ತದಲ್ಲಿ ಚಿತ್ರಿಸಿ ಇಟ್ಟಿದ್ದು
ನನ್ನ ಕಣ್ಮುಂದೆ ಬರ್ತೀಯಾ ಎಂದು
ಆದರೆ ನೀ ಕೊನೆಗೂ ಮೌನಿಯಾಗಿ ಕುಳಿತೆ
ಚಿತ್ತದಲ್ಲಿ ಚಿತ್ರದಲ್ಲಿ........
ಆದರೆ,
ನಾ ಮತ್ತೇ ಬರುವೆ ನಿನಗಾಗಿ
ಪುನರ್ಜನ್ಮ ತಳೆದು................
ನಿನ್ನ ನೆನಪಿನಲ್ಲಿ
ನನ್ನ ಕನಸು
ನನ್ನ ಕನಸು
ಬಸ್ ಸ್ಟಾಪಿನಲ್ಲಿ ನೀ ಬಿದ್ದೆ
ನನ್ನ ಕಣ್ಣಿಗೆ,
ನಾ ಹತ್ತಿದೆ ನೀ ಹತ್ತಿದ ಬಸ್ಸಿಗೆ
ಬಸ್ಸಲ್ಲಿ ಕೂಡಲು ಜಾಗವಿಲ್ಲದೇ
ನಾವಿಬ್ಬರೂ ನಿಂತೆವು ಒತ್ತೊಟ್ಟಿಗೆ.
ಬಸ್ಸಿನ ವೇಗ ಹೆಚ್ಚಾಯಿತು
ನಮ್ಮಿಬ್ಬರ ದೇಹಕ್ಕೆ ಮಾತಾಯಿತು
ನಿನ್ನ ಗಮನ ನನ್ನತ್ತ ಹರಿಯಿತು
ನಿನ್ನ ಕಣ್ಣುಗಳ ಮಿಂಚು ನನ್ನನ್ನು ಸೆಳೆಯಿತು.
ಮೂಕಾದವು ಮನಸುಗಳು
ಮಾತಾಡಿದವು ಕಣ್ಣುಗಳು
ನನಗಾಗ ಅನ್ನಿಸಿತು,
ನಾವಾಗಬಹುದಲ್ಲವೇ ಯುವ ಪ್ರೇಮಿಗಳು.
ಬಸ್ಸಿನಿಂದ ನೀ ಇಳಿದೆ
ತಿರುಗಿ ಹೂ ನಗೆಯ ಬೀರಿದೆ
ಸಂತೋಷದಿಂದ ನನ್ನ ಎರಡೂ ಕೈ ಎತ್ತಿದೆ
ಮಂಚದಿಂದ ನಾ ನೆಲಕ್ಕುರುಳಿದೆ.
ಗಾಬರಿಯಿಂದ ನಾ ಕಣ್ತೆರೆಯಲು
ನಡೆದದ್ದೆಲ್ಲವೂ ಕನಸಾಗಲು.............
ನಿಮ್ಮ ಪವನ.........
ಬಸ್ ಸ್ಟಾಪಿನಲ್ಲಿ ನೀ ಬಿದ್ದೆ
ನನ್ನ ಕಣ್ಣಿಗೆ,
ನಾ ಹತ್ತಿದೆ ನೀ ಹತ್ತಿದ ಬಸ್ಸಿಗೆ
ಬಸ್ಸಲ್ಲಿ ಕೂಡಲು ಜಾಗವಿಲ್ಲದೇ
ನಾವಿಬ್ಬರೂ ನಿಂತೆವು ಒತ್ತೊಟ್ಟಿಗೆ.
ಬಸ್ಸಿನ ವೇಗ ಹೆಚ್ಚಾಯಿತು
ನಮ್ಮಿಬ್ಬರ ದೇಹಕ್ಕೆ ಮಾತಾಯಿತು
ನಿನ್ನ ಗಮನ ನನ್ನತ್ತ ಹರಿಯಿತು
ನಿನ್ನ ಕಣ್ಣುಗಳ ಮಿಂಚು ನನ್ನನ್ನು ಸೆಳೆಯಿತು.
ಮೂಕಾದವು ಮನಸುಗಳು
ಮಾತಾಡಿದವು ಕಣ್ಣುಗಳು
ನನಗಾಗ ಅನ್ನಿಸಿತು,
ನಾವಾಗಬಹುದಲ್ಲವೇ ಯುವ ಪ್ರೇಮಿಗಳು.
ಬಸ್ಸಿನಿಂದ ನೀ ಇಳಿದೆ
ತಿರುಗಿ ಹೂ ನಗೆಯ ಬೀರಿದೆ
ಸಂತೋಷದಿಂದ ನನ್ನ ಎರಡೂ ಕೈ ಎತ್ತಿದೆ
ಮಂಚದಿಂದ ನಾ ನೆಲಕ್ಕುರುಳಿದೆ.
ಗಾಬರಿಯಿಂದ ನಾ ಕಣ್ತೆರೆಯಲು
ನಡೆದದ್ದೆಲ್ಲವೂ ಕನಸಾಗಲು.............
ನಿಮ್ಮ ಪವನ.........
ಆದರ್ಶ ದಂಪತಿ
ಆದರ್ಶ ದಂಪತಿ..
ಎಲ್ಲೋ ಹುಟ್ಟಿ ಎಲ್ಲೋ ಬೆಳೆದ
ಒಂದು ಗಂಡು ಒಂದು ಹೆಣ್ಣು
ಆಗುವರಿಬ್ಬರೂ ಒಂದು ಸಂಸಾರದ
ಎರೆಡು ಕಣ್ಣು.
ನಾ ಹೆಚ್ಚು ತಾ ಹೆಚ್ಚೆಂದ
ವ್ಯತ್ಯಾಸವಿರಕೂಡದ ಅವರಲ್ಲಿ
ಈರ್ವರೂ ಸಮಾನರೆಂದು
ಸುಖ-ದು:ಖ ಹಂಚಿಕೊಳ್ಳಬೇಕು
ತಮ್ಮ ಜೀವನದಲ್ಲಿ.
ಗತಕಾಲದ ನೋವ ಮರೆತು
ಭವಿಷ್ಯದ ಸುಖವನರಿತು
ಬಾಳಬೇಕು ಸತಿ-ಪತಿ ಗಳು,
ಅವರ ಜೀವನದಲ್ಲಿರಬೇಕು
ದಿಟ್ಟ ಹೆಜ್ಜೆಗಳು.
ಅನುಮಾನವೆಂಬ ನರಕವ
ಸೃಷ್ಟಿಸಬಾರದು,
ವಿರಸವೆಂಬ ವಿಷವರ್ತುಲದಲಿ
ಸಿಲುಕಿ ನೋಯಬಾರದು,
ಆದರ್ಶ ದಂಪತಿಗಳಾಗಿ
ಜೀವನ ನಡೆಸಬೇಕು,
ಮುಂಬರುವ ದಂಪತಿಗಳಿಗೆ
ಮಾದರಿಯಾಗಬೇಕು..........
ನಿಮ್ಮ ಪವನ...............
ಎಲ್ಲೋ ಹುಟ್ಟಿ ಎಲ್ಲೋ ಬೆಳೆದ
ಒಂದು ಗಂಡು ಒಂದು ಹೆಣ್ಣು
ಆಗುವರಿಬ್ಬರೂ ಒಂದು ಸಂಸಾರದ
ಎರೆಡು ಕಣ್ಣು.
ನಾ ಹೆಚ್ಚು ತಾ ಹೆಚ್ಚೆಂದ
ವ್ಯತ್ಯಾಸವಿರಕೂಡದ ಅವರಲ್ಲಿ
ಈರ್ವರೂ ಸಮಾನರೆಂದು
ಸುಖ-ದು:ಖ ಹಂಚಿಕೊಳ್ಳಬೇಕು
ತಮ್ಮ ಜೀವನದಲ್ಲಿ.
ಗತಕಾಲದ ನೋವ ಮರೆತು
ಭವಿಷ್ಯದ ಸುಖವನರಿತು
ಬಾಳಬೇಕು ಸತಿ-ಪತಿ ಗಳು,
ಅವರ ಜೀವನದಲ್ಲಿರಬೇಕು
ದಿಟ್ಟ ಹೆಜ್ಜೆಗಳು.
ಅನುಮಾನವೆಂಬ ನರಕವ
ಸೃಷ್ಟಿಸಬಾರದು,
ವಿರಸವೆಂಬ ವಿಷವರ್ತುಲದಲಿ
ಸಿಲುಕಿ ನೋಯಬಾರದು,
ಆದರ್ಶ ದಂಪತಿಗಳಾಗಿ
ಜೀವನ ನಡೆಸಬೇಕು,
ಮುಂಬರುವ ದಂಪತಿಗಳಿಗೆ
ಮಾದರಿಯಾಗಬೇಕು..........
ನಿಮ್ಮ ಪವನ...............
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)