ಬುಧವಾರ, ಆಗಸ್ಟ್ 12, 2009

ಒಂದಿಷ್ಟು ಶಿರೋಲೇಖ ಕುರಿತು.

ಮನದ ಮೌನ
"ಮನದ ಮೌನ" ನಾನು ಏಕೆ? ಈ ಹೆಸರನ್ನು ಆಯ್ದುಕೊಂಡೆ ಎಂದು ಯೋಚಿಸಬಹುದು. ಅದಕ್ಕೆ ಕಾರಣ,
ಮೌನವು,
ಮ-ಮನುಷ್ಯನ
ನ-ನಡವಳಿಕೆಯ
ದ-ದರ್ಪಣ
ಮನುಷ್ಯನು ಸ್ವಭಾವತ: ಸಂಘ ಜೀವಿ, ನಾಲ್ಕು ಜನರ ಮಧ್ಯದಲ್ಲಿ ಮಾತನಾಡುವಾಗ ಕಸಿವಿಸಿಕೊಳ್ಳುವ ಸ್ವಭಾವದವರು ಇರುವುದುಂಟು. ಇದನ್ನು ನಾವು ಗಮನಿಸಿರದೇ ಇರುವುದಿಲ್ಲ. ಯಾವುದೇ ಒಬ್ಬ ವ್ಯಕ್ತಿ ಮನಸಿನಲ್ಲಿ ಇರುವ ತನ್ನ ಭಾವನೆಗಳನ್ನು ವ್ಯಕ್ತಪಡಿಸುವುದರಲ್ಲಿ ಹಿಂಜರಿದು ಮೌನಕ್ಕೆ ಶರಣಾಗುತ್ತಾನೆ. ಇದು ಅವನ ನಡುವಳಿಕೆಯಿಂದಲೇ ತಿಳಿಯುತ್ತದೆ.
ಇದು ಕೇವಲ, ಮಾತಿನಲ್ಲಷ್ಟೇ ಅಲ್ಲ, ವ್ಯಕ್ತಿ ತಾನು ಒಬ್ಬ ಉತ್ತಮ ಗಾಯಕ, ಕವಿತೆ ರಚನೆ ಮಾಡುವವ, ವಿದೂಷಕ ಇತ್ಯಾದಿ ಅಂತೆಲ್ಲ ಮತ್ತೋಬ್ಬರ ಮುಂದೆ ತೋರಿಸಿಕೊಳ್ಳದೇ, ಹೇಳಿಕೊಳ್ಳದೇ ಮೌನಕ್ಕೆ ಶರಣಾಗುತ್ತಾನೆ. ಅಂಥವರಲ್ಲಿ ನಾನೂ ಇರಬಹುದು ನೀವೂ ಇರಬಹುದು.
ಅದಕ್ಕಾಗಿ "ಮನದಲ್ಲಿ ಮೌನ" ವಾಗಿ ಕುಳಿತಿರುವ ವಿಷಯಗಳ ಕುರಿತು ಒಬ್ಬರಿಗೊಬ್ಬರು ಹಂಚಿಕೊಂಡು ಸಂತೋಷದಿಂದ ಇರುವುದಕ್ಕಾಗಿಯೇ ಈ

"ಮನದ ಮೌನ"
ಮನದ ಮೌನದ ಕುರಿತು ಮತ್ತಿಷ್ಟು ಕಾಯುತ್ತಿರಿ
ನಿಮ್ಮ ಪವನ.

ಕಾಮೆಂಟ್‌ಗಳಿಲ್ಲ: